ಅವಳಲ್ಲಿ ನಾನು

ಈ ಮಧ್ಯಾಹ್ನ ಅವಳು ದಾಟಿ
ಹೋದಳು ಹಾಗೆಯೇ ಇದ್ದವು
ಅರೆತೆರೆದ ಕಣ್ಣುಗಳು ಕನಸುಗಳು
ಅದು ಅಪರೂಪದ ದೃಶ್ಯವೆಂದು
ಅನಿಸಿಕೊಂಡಾಗಲೇ ಬೆರೆಯುತ್ತಿತ್ತು
ಬೆವರ ಹನಿಗಳು ಗಾಳಿಯಲಿ,
ಅವಳು ಮೆತ್ತಗೆ ನಡೆಯುತ್ತಿದ್ದಳು.

ಗಾಳಿಯಲಿ ತೇಲಿದ ಪರಾಗ
ಸೆರಗಿನಗುಂಟ ಹರಿದು, ಅವಳ
ಮೈಗೆ ಮೆತ್ತಿಕೊಂಡಿದೆ ದಣಿವು ಗಂಧ,
ಮನೆಯಲಿ ಮಿನುಗುವ ಕಣ್ಣುಗಳು
ಮಕ್ಕಳು ಹಾರಾಡಿವೆ ಹಾಗೆ ಚಿಟ್ಟೆಗಳಾಗಿ,
ಅವಳೆದೆಯ ತುಂಬ ಕೆಂಡಸಂಪಿಗೆ
ಅವಳು ಮೌನವಾಗಿ ಸರಿದು ಹೋಗಿದ್ದಾಳೆ.

ಶೂನ್ಯದ ಕ್ಷಣಗಳಲಿ ಒಂದಾದ
ಅವಳ ಕಣ್ಣೋಟಗಳು ಯಾಕೋ
ಎದೆಗೂಡಿನೊಳಗೆ ಕಟ್ಟಿವೆ ಜೇನುಗೂಡು,
ನಾನು ಅವಳೋ ಅವಳು ನಾನೋ
ಪ್ರಭೆಯಲಿ ಒಂದಾದ ಮರಳೋ
ಸಮರ ಹೂಡಿದ ಯೋಧರಂತೆ
ಸಾಗಿದ್ದೇವೆ ಟೊಂಕಕಟ್ಟಿ ಹರವಾದ ಬದುಕಿನಲ್ಲಿ.

ಇಂದು ನಿನ್ನೆಯಂಥೆ ಇಲ್ಲ ಅವಳು
ಬದಲಾಗಿದ್ದಳು ವಿಸ್ಮಯಗಳು ಘಟಿಸಿವೆ
ಯಾರೂ ಹೊರಳದ ದಾರಿಯ ತಿರುವಿನಲಿ
ಸಂಜೆಯ ಬಿಸಿಲಿನ ನೆರಳುಗಳು ಮುಳುಗಿ
ಹರಿದು ಹೋಗುತ್ತದೆ ನದಿಯ ಅಲೆ ಅಲೆಗಳು
ನಮ್ಮ ಕುರುಹುಗಳು ಅಲ್ಲಿ ಕಾಣುವವು
ಒಂದರೊಳಗೊಂದು ಇಳಿದಂತೆ ಹೊಕ್ಕಳ ಬಳ್ಳಿ ಬೇರುಗಳು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಷೆ ಬಂದು ನಕ್ಕಾಗ
Next post ಗೂಡೆಲುಬು

ಸಣ್ಣ ಕತೆ

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

cheap jordans|wholesale air max|wholesale jordans|wholesale jewelry|wholesale jerseys